Skip to playerSkip to main contentSkip to footer
  • today
ಚಾಮರಾಜನಗರ : ಲಾರಿ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನ ಕಾಲಿಗೆ ಹಾವೊಂದು ಸುತ್ತಿಕೊಂಡಿರುವ ಘಟನೆ ಯಳಂದೂರು ತಾಲೂಕಿನ ಯರಿಯೂರು ಬಳಿ ಗುರುವಾರ ನಡೆದಿದೆ. ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಲೋಡ್ ತುಂಬಿಕೊಂಡು ಸದ್ದಾಂ ಎಂಬ ಚಾಲಕ ಲಾರಿ ಚಾಲನೆ ಮಾಡುವಾಗ ದಿಢೀರ್ ಎಂದು ಕ್ಯಾಬಿನ್​ನಿಂದ ಕೇರೆ ಹಾವೊಂದು ಬಂದು ಕಾಲಿಗೆ ಸುತ್ತಿಕೊಂಡಿದೆ. ಈ ವೇಳೆ ಎದುರಿನಿಂದ ಹಾಗೂ ಹಿಂಬದಿಯಿಂದ ಬಸ್, ಬೈಕ್ ಬರುವುದನ್ನು ಕಂಡಿರುವ ಚಾಲಕ ಗಾಬರಿಗೊಳಗಾಗದೇ ಲಾರಿಯನ್ನು ರಸ್ತೆಬದಿ ನಿಲ್ಲಿಸಿ ಅವಘಡವೊಂದನ್ನು ತಪ್ಪಿಸಿದ್ದಾರೆ. ಇದಾದ ಬಳಿಕ ವಿಷಯ ತಿಳಿದು ಉರಗ ರಕ್ಷಕ ಸ್ನೇಕ್ ಮಂಜು ಸ್ಥಳಕ್ಕೆ ದೌಡಾಯಿಸಿ, ಕ್ಯಾಬಿನ್ ಒಳಗೆ ಸೇರಿಕೊಂಡಿದ್ದ ಹಾವನ್ನು ರಕ್ಷಿಸಿದ್ದಾರೆ. ಈ ಬಳಿಕ ಉರಗ ರಕ್ಷಕ ಸ್ನೇಕ್ ಮಂಜು ಅವರು ಮಾತನಾಡಿದ್ದು, ಚಾಲಕನ ಕಾಲಿಗೆ ಹಾವು ಸುತ್ತಿಕೊಂಡ ಬಳಿಕ ಚಾಲಕ ತಕ್ಷಣಕ್ಕೆ ಗಾಬರಿಗೊಂಡು ಲಾರಿಯನ್ನು ನಿಲ್ಲಿಸಿದ್ದರೆ ಹಿಂದಿನಿಂದ ಬರುತ್ತಿದ್ದ ವಾಹನಗಳು ಡಿಕ್ಕಿ ಹೊಡೆದುಕೊಳ್ಳಬೇಕಿತ್ತು. ಸಮಯ ಪ್ರಜ್ಞೆಯಿಂದ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸಿರುವುದು ಶ್ಲಾಘನೀಯ ಎಂದಿದ್ದಾರೆ.ಇದನ್ನೂ ಓದಿ :  ತುಮಕೂರಿನ ಸಿದ್ದಗಂಗಾ ಮಠದಲ್ಲಿ 8 ಅಡಿ ಉದ್ದದ ಹೆಬ್ಬಾವು: ಅರಣ್ಯ ಪ್ರದೇಶಕ್ಕೆ ಬಿಟ್ಟ ಉರಗ ತಜ್ಞರು - 8 FEET LONG PYTHON CAUGHT

Category

🗞
News

Recommended